ಈ ಓಂಕಾರ ಬೆಟ್ಟ ಬೆಂಗಳೂರಿನ ಹೊರ ವಲಯದಲ್ಲಿದೆ. ಮೈಸೂರ್ ರಸ್ತೆಯಿಂದ ಸುಮಾರು ೪-೫ ಕಿಲೋ ಮೀಟರ್ ದೂರದಲ್ಲಿ.ಇದು ಅಷ್ಟೊಂದು ಚಿರಪರಿಚಿತ ಸ್ಥಳವಲ್ಲದರಿಂದ ಜನರ ದಟ್ಟನೆ ಕಡಿಮೆಯೇ. ಬಸ್ಸಿನಲ್ಲಿ ಹೋಗುವುದಾದರೆ ಕೆ .ಆರ್. ಮಾರ್ಕೆಟಿಂದ ಬಸ್ ಸಂಖ್ಯೆ 225 ಅಥವ 222 ಗೆ ಬರಬಹುದು. ಇಲ್ಲದಿದ್ದರೆ ನೀವು ಸ್ಯಾಟಲೈಟ್ ಬಸ್ ನಿಲ್ದಾಣದಿಂದವೂ ಬರಬಹುದು. ಈ ಬೆಟ್ಟವು ಸುಮಾರು 2800 ಅಡಿ ಎತ್ತರ ಇದ್ದು , ದಕ್ಷಿಣ ಬೆಂಗಳೂರನ್ನು ಪಕ್ಷಿ ನೋಟದಲ್ಲಿ ಕಾಣಬಹುದಾಗಿದೆ. ಬುಸ್ಸಿನ್ನಲ್ಲಿ ಹೋದಾಗ ನೀವು JSS ಕಾಲೇಜು ಸ್ಟಾಪ್ ನಲ್ಲಿ ಇಳಿದುಕೊಂದರೆ ನಿಮಗೆ ಬೆಟ್ಟ ಹಾಗೂ ಅದರ ಮೇಲಿರುವ ದೇವಸ್ಥಾನವು ಕಾಣಿಸುತ್ತದೆ. ಹಾಗೆ ಆ ಮಣ್ಣು ರಸ್ತೆಯನ್ನು ಹತ್ತಿ ಮೇಲೆ ಬಂದರೆ ಅದೇ "ಓಂಕಾರ ಬೆಟ್ಟ".
ಈ ಓಂಕಾರ ಬೆಟ್ಟದ ಮೇಲೆ ಹತ್ತುತ್ತಿದ್ದಂತೆ ನನ್ನನ್ನು ಆಕರ್ಷಿಸಿದ್ದು ಒಂದು ಬೃಹದಾಕಾರದ ಗಡಿಯಾರ. ಎಚ್.ಎಂ.ಟಿ ಕಂಪನಿ ಯವರು ಇದನ್ನು ನಿರ್ಮಿಸಿದ್ದಾರೆ. ಇದು ಜಗತ್ತಿನ ಎರಡನೇ ಅತಿ ದೊಡ್ಡ ಗಡಿಯಾರ ಎಂದು ಪರಿಗಣಿಸಲಾಗಿದೆ. ಗಡಿಯಾರದ ಮುಖಬಿಲ್ಲೆಯ ಅಡ್ಡಳತೆ ಸುಮಾರು 24 ಅಡಿ ಉದ್ದವಿದೆ.UK ಯಲ್ಲಿ "ಬಿಗ್ ಬೆನ್" ಎಂಬ ಜಗದ್ವಿಖ್ಯಾತ ಗಡಿಯಾರಕ್ಕಿಂತ ದೊಡ್ಡದಾಗಿದೆ ಈ ಗಡಿಯಾರ. ಈ ಗಡಿಯಾರದ ವಿಶೇಷತೆ ಏನು ಎಂದರೆ ಇದು ಘಂಟೆಗೊಂದು ಸಾರಿ "ಓಂ " ಎಂಬ ನಾದದಲ್ಲಿ ಐದು ನಿಮಿಷ ಬದಿದುಕೊಳ್ಳುತ್ತದೆ.ಇದನ್ನು "ಶಂಖನಾದ "ಎಂದು ಕರೆಯಲಾಗುತ್ತದೆ.




ಹಾಗೇ ಮುಂದುವರಿದಾಗ ಅಲ್ಲೊಂದು ದೊಡ್ಡ ಆಲದ ಮರ ನಮ್ಮ ಕಣ್ಣಿಗೆ ಕಾಣ ಸಿಗುತ್ತದೆ.ಇದನ್ನು "ಸರ್ವಧರ್ಮ ಸಮನ್ವಯ ಪೀಠ " ಎಂದು ಹೆಸರಿಸಿದ್ದಾರೆ. ಅರ್ಥಾತ್ ಸಕಲ ಧರ್ಮದ ಸಮಾನ ಪೀಠ ಎಂದು . ಈ ಮರದಡಿಯಲ್ಲಿ ಸುಮಾರು ಎಂಟು ಚಿಕ್ಕ- ಚಿಕ್ಕ ಬೇರೆ -ಬೇರೆ ಮಂದಿರಗಳನ್ನು ನಿರ್ಮಿಸಿದ್ದಾರೆ .(ಏಸು ಕ್ರಿಸ್ತ,ಬುದ್ದ, ಮಹಾವೀರ,ಮಾಧವಾಚಾರ್ಯ,ಇತ್ಯಾದಿ).





ಮುಂದೆ ಹೋಗುತ್ತಿದ್ದಂತೆ ,ಒಳಗೆ ದೇವರ ಮಂದಿರವಿದೆ. ಅಲ್ಲಿ ನಾವು ತೀರ್ಥ ಪ್ರಸಾದ ತೆಗೆದುಕೊಂಡು ಹೊರ ಬಂದ್ವಿ.ಆಮೇಲೆ ಫೋಟೋ ತೆಗೆಯುವುದರಲ್ಲಿ ಕಳೆದು ಹೋದೆವು.

ವಾರಾಂತ್ಯದಲ್ಲಿ ತಕ್ಷಣಕ್ಕೆ ಹೋಗಿ ಬರಲು , ಮನಸ್ಸನ್ನು ಆಹ್ಲಾದ ಗೊಳಿಸಲು ಇದೊಂದು ಸುಂದರ ಜಾಗ. ಇಲ್ಲಿ ತುಂಬಾ ಹೊತ್ತು ಇರುವ ಯೋಚನೆ ಇದ್ದಲ್ಲಿ ಉಪಹಾರ ತಂದುಕೊಳ್ಳುವುದು ಒಳ್ಳೆಯದು, ಏಕೆಂದರೆ ಹತ್ತಿರದಲ್ಲಿ ಏನೂ ಸಿಗುವುದಿಲ್ಲ.ಹಾಗೇ ಈ ಜಾಗ ನೋಡಲು ಬಂದವರು, ಸಮಯ ಮಿಕ್ಕಿದ್ದರೆ ಹತ್ತಿರದಲ್ಲೇ ಇರುವ "ಶ್ರೀಧರ ಬೆಟ್ಟ ", "ದೊಡ್ಡಾಲದ ಮರ" ಮತ್ತು "ಮುಕ್ತಿನಾಗ " ದೇವಸ್ಥಾನಕ್ಕೂ ಹೋಗಬಹುದು.







ಮನೆಗೆ ಬರುವಾಗ ಮನಸೆಲ್ಲ ಖುಷಿ ಖುಷಿ!!.ಒಮ್ಮೆ ಭೇಟಿ ಕೊಟ್ಟು ನೋಡಿ . ಒಂದು ದಿನದ ವಿಹಾರದ ಸಂತೋಷಕ್ಕೇನೂ ಮೋಸ ಇಲ್ಲ!! ಹೋಗ್ತಿರಲ್ಲ?
ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿ ಕೊಡಿ..http://omkarhills.org/