
"ಆರಾಮಾಗೆ ಇದ್ದೆ ನಾನು,
ನಿನ್ನ ಕಂಡು ಅರೆ ಏನಾಯಿತು"
ಯಾಕೋ ಹೃದಯ ಭಾರವಾಗುತ್ತಿದೆ, ಮನಸ್ಸು ಖಾಲಿ-ಖಾಲಿ. ಏನೋ ಒಂದು ತೀರ ಹತ್ತಿರವಾದುದನ್ನು ಕಳೆದುಕೊಳ್ಳುವ ಭಯ ಕಾಡುತ್ತಿದೆ. ಯಾವ ವಿಷಯಗಳಿಗೂ ಹೆದರದ , ಬೇಸರ ಪಡದ ಮನಸು , ಯಾಕೋ ಈಗ ಮೂಕವಾಗಿ ಅಳುತ್ತಿದೆ. ಉತ್ಸಾಹ ಮೂಲೆಯಲ್ಲಿ ಅಡಗಿ ಕುಳಿತಿದೆ . 2012 ರಲ್ಲಿ ಬರುವ ಪ್ರಳಯ ಈಗಲೇ ಬಂದ ಹಾಗೆ ಭಾಸವಾಗುತ್ತಿದೆ. ನನ್ನೊಳಗೊಂದು ತೀವ್ರ ತರನಾದ ಒಂದು ನೋವು, ದುಃಖ , ಸಂಕಟ, ಅಸಹಾಯಕತೆ, ಕಾಡುತ್ತಿದೆ. ಜಗತ್ತಿನ ಸಂಪರ್ಕದಿಂದ ಓಡಿ ಹೊರಟು ಹೋಗಬೇಕೆನಿಸುತ್ತಿದೆ. ನನ್ನ ಮನಸ್ಸು ಸ್ಥಿಮಿತಕ್ಕೆ ಬರುತ್ತಿಲ್ಲ . ಏನೋ ಒಂದು ಅಲೆ ಎದ್ದಿದೆ ಮನಸ್ಸಲ್ಲಿ, ಎದೆಯಲ್ಲಿ ಆರದ ಉರಿ.ಕುಂತರೂ , ನಿಂತರೂ ಏನೋ ಯೋಚನೆ. ಏನೋ ತಳಮಳ!!!
ಈ one sided ಪ್ರೇಮವೇ ಹೀಗೆ ಅಲ್ಲವಾ ?ನಾವು ಜೀವನದಲ್ಲಿ ಅದೆಷ್ಟೋ ಜನರನ್ನು ನೋಡುತ್ತೇವೆ ,ಒಡನಾಡುತ್ತೇವೆ ,ಜೊತೆಜೊತೆಯಾಗಿರುತ್ತೇವೆ ಕೂಡ . ಚಿಕ್ಕಂದಿನಿಂದ ಹಿಡಿದು ದೊಡ್ದವರಾಗುವರೆಗೆ ಬಂದು ಹೋಗುವವರು ಲೆಕ್ಕಕ್ಕಿಲ್ಲ .ಎಷ್ಟೋ ಜನರನ್ನು ನಾವು ಕಡೇವರೆಗೂ ನೆನಪಿಟ್ಟುಕೊಂಡರೆ ಇನ್ನು ಕೆಲವರನ್ನು ನಮಗರಿವಿಲ್ಲದಂತೆ ಮರೆತಿರುತ್ತೇವೆ .ಎಷ್ಟೋ ಸ್ನೇಹಿತರು ಗೆಳಯರು ಇರುತ್ತಾರೆ .ಆದರೆ ಎಲ್ಲೋ ಒಂದು ಕಡೆ ,ನಮ್ಮನ್ನು ಅರ್ಥ ಮಾಡಿಕೊಳ್ಳುವ, ನಾವು ಪ್ರೀತಿಸಿದಷ್ಟೇ ನಮ್ಮನ್ನು ಪ್ರೀತಿಸುವ, ಇಡೀ ಜಗತ್ತೇ ನಮ್ಮ ವಿರುದ್ಧ ಇದ್ದರೂ ಒಬ್ಬರಾದರೂ" ನಾನು ಇದ್ದೀನಿ " ಎಂದೂ ಹೇಳುವ ಜೀವಕ್ಕಾಗಿ ಹಂಬಲಿಸುವುದು ಸಹಜ ತಾನೇ ?ನಾನಂತೂ ಹಂಬಲಿಸುತ್ತೇನೆ... ಅದು ಬಹಳ ಸ್ವಾಭಾವಿಕ ಅನಿಸುತ್ತದೆ ನನಗೆ..
ಕೆಲವರಿಗೆ ದೇವರು ಜೀವನದಲ್ಲಿ ಎಲ್ಲವನ್ನು ಕೊಟ್ಟಿರುತ್ತಾನೆ . ಅಪ್ಪ , ಅಮ್ಮ , ಅಣ್ಣ ,ತಂಗಿ ,ಅಕ್ಕ ,ತಮ್ಮ ,ಬಂಧು- ಮಿತ್ರರು, ಹಣ , ಸೌಂದರ್ಯ, ಹೀಗೆ ಎಲ್ಲವನ್ನೂ . ಆದರೆ ನಾವು ಯಾಕೆ ಇಷ್ಟರಲ್ಲೇ ಸಂತಸ ಪಡುವುದಿಲ್ಲ ?ನಮ್ಮ ಮನಸ್ಸು ಯಾಕೆ ಒಂದು ಸಂಗಾತಿಗಾಗಿ ಹಗಲೂ -ಇರುಳೂ ಪರಿತಪಿಸುತ್ತಿರುತ್ತದೆ ? ನಮಗೆ ಇಷ್ಟವಾದವರಿಗೆ ನಾವು ಯಾಕೆ ಇಷ್ಟವಾಗುವುದಿಲ್ಲ ? ಹಾಗೇನು ನಿಯಮವೂ ಇಲ್ಲವಲ್ಲ!!!ಬಾಳ ಪಯಣದಲ್ಲಿ ಒಂಟಿತನ ಅನುಭವಿಸುತ್ತಿರುವವರಿಗೆ, ಎಲ್ಲೋ ಒಂದು ಕಡೆ ಸಾಸಿವೆಯಷ್ಟು ಪ್ರೀತಿ , care ಸಿಕ್ಕರೆ ಯಾಕೆ ಅವರ ಹಿಂದೆ ಬಿದ್ದುಬಿಡುತ್ತೇವೆ ?ಅವರು ನಮ್ಮನ್ನು ಇಷ್ಟಪಡುವುದಿಲ್ಲ ಎಂದು ತಿಳಿದ ಮೇಲೂ ನಾವ್ಯಾಕೆ ಅವರನ್ನೇ ಇಷ್ಟ ಪಡುತ್ತೇವೆ ? ಅವನಿಲ್ಲದಿದ್ದರೆ ಮತ್ತೊಬ್ಬ ಎಂದು ಬೆನ್ನು ತಿರುಗಿಸಿ ಹೊರಟು ಬಿಡಲು ಯಾಕೆ ಎಲ್ಲರಿಂದಲೂ ಸಾದ್ಯವಾಗುವುದಿಲ್ಲ ?ಎಲ್ಲಾ ಹುಡುಗಿಯರೂ ಆಟವಾಡಿಸುವವರೇ ( ಇದು ಬಹಳಷ್ಟು ಹುಡುಗರ ಧೋರಣೆ - exceptions ಇರಬಹುದು )ಹಾಗಿದ್ದರೆ ಅದು ಎಲ್ಲರಿಂದಲೂ ಯಾಕೆ ಸಾದ್ಯವಿಲ್ಲ ?ತುಂಬಾ ಪ್ರೀತಿಸಿದವರನ್ನ , ಅವರು ತಿರಸ್ಕರಿಸಿಬಿಟ್ಟರು ಎಂಬ ಒಂದೇ ಮಾತಿಗೆ ,ಅವರನ್ನೂ ನಾವು ಹಾಗೆ ಮಾಡಲು ಸಾದ್ಯವಿದೆಯಾ? ಈ ಹೃದಯಗಳಿಗೂ ಬುದ್ದಿ ಇರಬೇಕಿತ್ತು. ಹೇಗೆ ನಾವು ಬೇರೆ ವಿಷಯದಲ್ಲೆಲ್ಲ ಬುದ್ದಿ ಉಪಯೋಗಿಸಿ ಮುಂದಿನ ಹೆಜ್ಜೆಯನ್ನು ಇದುತ್ತೆವೋ , ಹಾಗೇ ಪ್ರೀತಿ ವಿಷ್ಯದಲ್ಲೂ ಮಾಡಬಹುದಿತ್ತು. ಪ್ರೀತಿಸುವ ಹೃದಯಕ್ಕೆ , ಮರು ಪ್ರೀತಿ ಸಿಕ್ಕರೆ ಆ ಪ್ರೀತಿಸಿದ ಹೃದಯ ಅದೆಷ್ಟು ಸಂತಸಪಟ್ಟಿತೋ ಆ ದೇವರಿಗೆ ಗೊತ್ತು.ಆದರೆ ಅದು ಸಿಗುವುದಿಲ್ಲ. ಇದು ಪ್ರೀತಿಸಿಕೊಂಡ ಹೃದಯಕ್ಕೂ ತಿಳಿಯುವುದಿಲ್ಲ. ಇದು ಬದುಕಿನ ವಿಪರ್ಯಾಸ!!!
ಅವನು ನನ್ನನ್ನು ತಿರಸ್ಕರಿಸಿಬಿಟ್ಟ ಎಂದು ಹುಡುಗಿ ತಕ್ಷಣ ಬೇರೆಯವನನ್ನು ಮದುವೆಯಾದರೆ ಪ್ರೀತಿಗೆ ಬೆಲೆ ಎಲ್ಲಿ ಬಂತು ಹೇಳಿ ?ಈ one-sided ಪ್ರೀತಿ ಇದೆಯಲ್ಲ ಅದು ಬಹಳ ಚಂದ ಮತ್ತು ಸುಂದರ . ನಾವು ಪ್ರೀತಿಸುವವರು ನಮ್ಮನ್ನು ಪ್ರೀತಿಸುತ್ತಾರೋ , ಇಲ್ಲವೋ ಎಂಬುದರ ಕಿಂಚಿತ್ತೂ ಕಲ್ಪನೆ ಇಲ್ಲದೆ , ನಾವು ಶ್ರುಷ್ಟಿಸಿಕೊಳ್ಳುವ ನಮ್ಮದೇ ಜಗತ್ತಿದೆಯಲ್ಲ ಅದು , ಅದರ ಸಂತಸ ಬಲ್ಲವರಿಗಷ್ಟೇ ಗೊತ್ತು . ಲೋಕದ ಕಣ್ಣುಗಳಿಗೆ ಅವರು ಭಗ್ನ ಪ್ರೇಮಿಗಳಂತೆ ಕಂಡರೂ ಅವರು ಅವರಲ್ಲೇ ಸಂತೃಪ್ತರು . ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು ಮದುವೆಯಾದರೂ , ಎಷ್ಟೋ ದಿನಗಳು ,ವರುಷ ಗಳಾದ್ರೂ , ಕೊನೆಗೊಮ್ಮೆ ಸತ್ತು ಮಣ್ಣಲ್ಲಿ ಮಣ್ಣಾದರೂ ಹೃದಯ ಮಾತ್ರ ಪ್ರೀತಿಸಿದವರಿಗೆ ಮಿಡಿಯುತ್ತಲೇ ಇರುತ್ತದೆ , ಅವರನ್ನೇ ಪ್ರೀತಿಸುತ್ತಿರುತ್ತದೆ ...... :-(











